ರೂಪಸಿ

ಯಾವ ಶಿಲ್ಪಿಯ ವರದಾನವೋ
ನೀನೇನು ದೇವ ಕನ್ಯೆಯೋ?
ಚಂದಿರನೆ ನಾಚುವ ನಿನ್ನಯ ಈ ಅಂದ ಕಂಡು

ಸಿಂಧೂರ ತಿಲಕದ ಹಣೆಗೆ
ಸೀರೆ ಸೆರಗಿನಾ ಹೊದಿಕೆ
ಮುಂಗುರುಳು ನಾಚಿ
ಇಣುಕುತಿದೆ ಹೊರಗೆ

ಬೊಗಸೆ ಕಣ್ಗಳ ಒಳಗೆ
ಆಸೆಗಳ ಮಿಡಿತ
ಮಧು ತುಂಬಿದ ಅಧರದಲಿ
ಮುಗುಳ್ನಗೆಯ ಬಿಂಬ

ಹಾರಾಡುವ ನಿನ್ನ ಕೇಶಗಳಲಿ
ಕಾಣುತಿದೆ ನನ್ನ ಸ್ವಾಗತವು
ಬಿಗಿದಿಟ್ಟ ಹೃದಯವೇ ಹೇಳುತಿದೆ
ಮನದೊಳಗೇ ಬಚ್ಚಿಟ್ಟ ಆಸೆಯನು

ನಲ್ಲನ ಕಾಣುವ ಕಾತರವು ಹೆಚ್ಚಾಗಿ
ಅರಳಿದೆ ನಿನ್ನಯ ತನುವು ಮೃದುವಾಗಿ
ಒಳಗೆ ತುಂಬಿದೆ ಒಲವು ಬಲವಾಗಿ
ಕಾಯುತ್ತಿರುವೆ ಏನು? ಚಲುವನಿಗಾಗಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ಹೂ ಬುಟ್ಟಿ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys